Published
2 months agoon
By
Akkare News
ಬೆಂಗಳೂರು : ಕೋಗಿಲು ಉಳಿಸಿ – ಬೆಂಗಳೂರು ಉಳಿಸಿ!ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋಗಿಲು ಬಡಾವಣೆಯ ಸರ್ಕಾರಿ ಜಾಗದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆಯ ವಿರುದ್ಧ ಬೆಂಗಳೂರು ಉತ್ತರ ಜಿಲ್ಲೆಯ ಶ್ರೀನಿವಾಸ ಗಾರ್ಡನ್ನಲ್ಲಿ ನಡೆದ“ಕೋಗಿಲು ಉಳಿಸಿ – ಅಕ್ರಮ ವಲಸಿಗರನ್ನು ತೊಲಗಿಸಿ”ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಕ್ಷಣಗಳು.ಕಳೆದ 25 ವರ್ಷಗಳಿಂದ ವಸತಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಸಾವಿರಾರು ಕನ್ನಡಿಗ ನಿರಾಶ್ರಿತರಿಗೆ ನ್ಯಾಯ ಇಲ್ಲ.ಆದರೆ ಅಕ್ರಮ ನಿವಾಸಿಗಳಿಗೆ ಮಾತ್ರ ವಿಶೇಷ ಸೌಲಭ್ಯ ಇದು ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿಯ ಸ್ಪಷ್ಟ ಉದಾಹರಣೆ.
.ಕನ್ನಡಿಗರ ಸ್ವಾಭಿಮಾನವನ್ನು ಒತ್ತೆ ಇಟ್ಟು ರಾಜಕೀಯ ತೆವಲಿಗೆ ಬೆಂಗಳೂರನ್ನು ಬಲಿಕೊಡಬೇಡಿ.ಅಕ್ರಮ ವಲಸಿಗರನ್ನು ತೊಲಗಿಸಿ –ಬೆಂಗಳೂರು ಮತ್ತು ಕೋಗಿಲು ಉಳಿಸಿ ಹೋರಾಟ ನಿಲ್ಲದು… ನ್ಯಾಯ ಸಿಗುವವರೆಗೂ. ಹೋರಾಟ ಮುಂದುವರಿಯುತ್ತದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದರು. ಈ ಪ್ರತಿಭಟನೆ ಸಭೆಯಲ್ಲಿ ಬಿಜೆಪಿ ಅಧ್ಯಕ್ಷರು ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಹಾಜರಾಗಿದ್ದರು.