ಪ್ರತಿ ವರ್ಷದಂತೆ ಈ ಬಾರಿಯೂ ಶಬರಿಮಲೆಯಲ್ಲಿ ಮಕರ ‘ಜ್ಯೋತಿ’ ದರ್ಶನ ಪಡೆದ ಸಹಸ್ರ ಸಹಸ್ರ ಭಕ್ತರು ಪುನೀತರಾದರು. ಮಕರ ಸಂಕ್ರಮಣ ದಿನವಾದ ಇಂದು ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ 3 ಬಾರಿ ಮಕರ ಜ್ಯೋತಿ ಕಾಣಿಸಿಕೊಂಡಿತು. ಈ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ‘ಜ್ಯೋತಿ’ಯನ್ನು ನೋಡಿ ಕಣ್ಣುಂಬಿಕೊಂಡರು. ಮಕರ ಜ್ಯೋತಿ ಗೋಚರಿಸುತ್ತಿದ್ದಂತೆಯೇ ಭಕ್ತರಿಂದ ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷಣೆ ಮುಗಿಲು ಮುಟ್ಟಿತ್ತು.