Published
1 month agoon
By
Akkare News
ಗುರುವಾರ ಸಚಿವರನ್ನು ವಿಧಾನಸೌಧ ಕಚೇರಿಯಲ್ಲಿ ಭೇಟಿಯಾದ ಶಾಸಕರು, ಬಜತ್ತೂರಿನಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣವಾಗಲಿದೆ. ವಸತಿ ಶಾಲೆಗೆ ನಿಗಧಿಮಾಡಲಾದ ಸರಕಾರಿ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಗೊಳಪಟ್ಟ ಮರಗಳಿದ್ದು ಅವುಗಳನ್ನು ಕಟಾವು ಮಾಡಬೇಕಾದ ಅವಶ್ಯಕತೆ ಇದೆ. ಕಟ್ಟಡ ನಿರ್ಮಾಣ ಮಾಡುವಷ್ಟು ಜಾಗದಲ್ಲಿ ಮಾತ್ರ ಮರಗಳನ್ನು ಕಟಾವು ಮಾಡುವಂತೆ ಸಚಿವಾಲಯದಿಂದ ಆದೇಶ ಅಗತ್ಯವಿದ್ದು ಇಲಾಖೆಗೆ ಸೂಚನೆ ನೀಡುವಂತೆ ಶಾಸಕರು ಮನವಿ ಮಾಡಿದ್ದಾರೆ.
ಮುಂಡೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ನಿರ್ಮಾಣಕ್ಕೆ ನಿಗಧಿ ಮಾಡಲಾದ ಜಾಗದಲ್ಲಿಯೂ ಸಾಮಾಜಿಕ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ ಮರಗಳಿದ್ದು ಅವುಗಳನ್ನು ಕಟಾವು ಮಾಡಲು ಆದೇಶ ಮಾಡುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ. ಶಾಸಕರ ಮನವಿಗೆ ಸಚಿವರು ಪೂರಕ ಸ್ಪಂದನೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.