Published
2 months agoon
By
Akkare News
ಬಿಗ್ಬಾಸ್ ಕನ್ನಡ ಸೀಸನ್ 12 ಅಂತಿಮವಾಗಿ ಮುಕ್ತಾಯವಾಗಿದ್ದು, ಲಕ್ಷಾಂತರ ಪ್ರೇಕ್ಷಕರ ಆಸೆಯಂತೆ ಗಿಲ್ಲಿ ನಟ ವಿನ್ ಆಗಿದ್ದಾರೆ. ಮೊದಲ ರನ್ನರ್ ಅಪ್ ಆಗಿ ರಕ್ಷಿತಾ ಶೆಟ್ಟಿ ಮತ್ತು 2ನೇ ರನ್ನರ್ ಅಪ್ ಆಗಿ ಅಶ್ವಿನಿ ಗೌಡ ಹೊರಹೊಮ್ಮಿದ್ದಾರೆ. ಬಿಗ್ಬಾಸ್ ಕನ್ನಡ ಸೀಸನ್ 12 ಆರಂಭವಾಗಿ 2ನೇ ವಾರಕ್ಕೆ ಜನರು ಗಿಲ್ಲಿಯೇ ವಿನ್ನರ್ ಎಂದು ಫಿಕ್ಸ್ ಆಗಿದ್ದರು. ಅದರಂತೆ ಅಂತಿಮವಾಗಿ ಗಿಲ್ಲಿ ನಟ ಗೆದ್ದಿದ್ದಾರೆ.
ಮನೆಯಿಂದ ಕಾವ್ಯಾ ಹೊರಹೋಗುತ್ತಿದ್ದಂತೆ, ಮನೆಯೊಳಗೆ ಗಿಲ್ಲಿ, ರಕ್ಷಿತಾ ಮತ್ತು ಅಶ್ವಿನಿ ಉಳಿದುಕೊಂಡರು. ಆಗ ಕಿಚ್ಚ ಸುದೀಪ್ ಅವರೇ ಮನೆಯೊಳಗೆ ಹೋದರು. ಸ್ಪರ್ಧಿಗಳು ಭಾವುಕ ಕ್ಷಣಗಳಿಗೆ ಸಾಕ್ಷಿಯಾದರು. ಸುದೀಪ್ ಮನೆಯ ಲೈಟ್ ಆಫ್ ಮಾಡಿ, ಸ್ಪರ್ಧಿಗಳನ್ನ ಹೊರಗೆ ಕರೆದುಕೊಂಡು ಬಂದರು. ವೇದಿಕೆ ಮೇಲೆ ಒಂದು ಚಟುವಟಿಕೆ ನಡೆಯಿತು. ಅದರಲ್ಲಿ ಅಶ್ವಿನಿ ಗೌಡ ಎಲಿಮಿನೇಟ್ ಆದರು. ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಟ ಉಳಿದರು. ಅಂತಿಮವಾಗಿ ಗಿಲ್ಲಿ ಕೈಯನ್ನ ಸುದೀಪ್ ಎತ್ತಿದರು. ಗಿಲ್ಲಿ ಮತ್ತು ರಕ್ಷಿತಾ ಆಟವನ್ನ ಸುದೀಪ್ ಹೊಗಳಿದ್ದಾರೆ. ಅದರಲ್ಲೂ ರಕ್ಷಿತಾ ಅವರು ತಮ್ಮ ಮೊದಲನೇ ರಿಯಾಲಿಟಿ ಶೋನಲ್ಲಿಯೇ ಫಿನಾಲವರೆಗೆ ಬಂದು, ರನ್ನರ್ ಅಪ್ ಆಗಿದ್ದರ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಹಾಗೇ, ಗಿಲ್ಲಿಯವರನ್ನೂ ಹೊಗಳಿ ʼತುಂಬ ಯೋಗ್ಯ ವ್ಯಕ್ತಿಗೆ ಜಯ ಸಿಕ್ಕಿದೆʼ ಎಂದು ಹೇಳಿದರು.
ಇವತ್ತು ಗಿಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ಬೆಳಗ್ಗೆಯಿಂದಲೇ ಜಾಲಿವುಡ್ ಬಳಿ ಅಭಿಮಾನಿಗಳು ಸೇರಿದ್ದರು. ಸಂಜೆ ಹೊತ್ತಿಗೆ ಅಂತೂ ಫ್ಯಾನ್ಸ್ ಹುಚ್ಚಾಟ ಜೋರಾಗಿತ್ತು. ಹೀಗಾಗಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಸೇರಿದ್ದರು. ಅವರ ಕೂಗಾಟ, ಡ್ಯಾನ್ಸ್ ಮಿತಿಮೀರಿದಾಗ ಅಂತಿಮವಾಗಿ ಲಾಠಿ ಚಾರ್ಜ್ ಕೂಡ ಮಾಡಲಾಯಿತು. ಗಿಲ್ಲಿ ಗೆದ್ದಿದ್ದು ಅವರ ಅಭಿಮಾನಿಗಳಿಗೆ ಹೇಳಲಾಗದಷ್ಟು ಸಂತೋಷವಾಗಿದೆ.