Published
11 months agoon
By
Akkare News
ಪುತ್ತೂರು: ಬನ್ನೂರು ಗ್ರಾಮದ ಸೇಡಿಯಪು ಅನಡ್ಕ ನಿವಾಸಿಯಾಗಿರುವ ಜಿಡೆಕಲ್ಲು ಕಾಲೇಜಿನ ಮಹಿಳಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.17ರಂದು ನಡೆದಿದೆ.
ಬನ್ನೂರು ಗ್ರಾಮದ ಕನಡ್ಕ ನಿವಾಸಿ, ಡೊಂಬಯ್ಯ ಕುಲಾಲ್ ಎಂಬವರ ಪುತ್ರಿ ತೇಜಸ್ವಿನಿ(22ವ) ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ತೇಜಸ್ವಿನಿ ಅವರು ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಂದೆ ಡೊಂಬಯ್ಯ ಕುಲಾಲ್, ತಾಯಿ ಭವಾನಿ, ಸಹೋದರ ಸ್ವಸ್ತಿಕ್ ಅವರನ್ನು ಅಗಲಿದ್ದಾರೆ.
‘