ಶಿವಮೊಗ್ಗ : ದಿನಾಂಕ 04-09-2026 ರಂದು, ಅರಣ್ಯ ಘಟಕ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್ ಸಿಂಗ್ ರವರ ಮಾರ್ಗದರ್ಶನದಲ್ಲಿ, ಅರಣ್ಯ ಸಂಚಾರಿ ದಳ ಸಾಗರದ ಪಿ.ಎಸ್.ಐ ವಿನಾಯಕ ಹಾಗೂ ಸಿಬ್ಬಂದಿಗಳು, ಹೊಸನಗರದ ರಿಪ್ಪನ್ ಪೇಟೆಯ ಬರುವೆ ರಸ್ತೆ ಬಳಿ ದಾಳಿ ಮಾಡಿ, ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿದ್ದ 21 kg ಜಿಂಕೆ ಮಾಂಸ ವಶಪಡಿಸಿಕೊಂಡಿದ್ದಾರೆ. ಎರ್ಟಿಗಾ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದು, ಇಬ್ಬರು ಆರೋಪಿಗಳು A1, ಗುರುರಾಜ S/o ನರಸಿಂಹನಾಯ್ಕ, ಬರುವೆ-ವಾಸಿ A2, ಗಣೇಶ ತಂದೆ ಗೋಪಾಲ, ಕಡಡಿಗ ವಾಸಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ಯಡಿ ಪ್ರಕರಣ ದಾಖಲಾಗಿಸಲಾಗಿದೆ. ಆದರೆ ಆರೋಪಿಗಳು ತಪ್ಪಿಸಿಕೊಂಡು ಓಡಿಹೋಗಿರುತ್ತಾರೆ. ದಾಳಿ ಸಮಯದಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಾದ, ಗಣೇಶ, B.C., ಆಂಜನೇಯ ಪಾಟೀಲ್, ಚಂದ್ರಕಾಂತ, ಸುರೇಶ, ಪ್ರಮೋದಿನಿ, H.B. ರುಕ್ಮಿಣಿ ಪಾಲ್ಗೊಂಡಿರುತ್ತಾರೆ.