Connect with us

ಇತರ

ಆರ್ ಸಿ ಬಿ ಫೈನಲ್ ಪಂದ್ಯಾಟ ಅಹಮದಾಬಾದ್‌ಗೆ ಶಿಫ್ಟ್ … ಡಿ ಕೆ .ಶಿ ಗರಂ

Published

on

ಬೆಂಗಳೂರು, ಜೂನ್‌ 1: ಐಪಿಎಲ್ 2026ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಟ್ರೋಫಿಗೆ ಮುತ್ತಿಟ್ಟಿದೆ. ಆದರೆ ಈ ಮಹತ್ವದ ಸಂದರ್ಭದಲ್ಲಿ ಆರ್‌ಸಿಬಿ ಫೈನಲ್‌ ಪಂದ್ಯವನ್ನು ಸ್ಥಳಾಂತರಿಸಿದ ಕುರಿತು ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಸಿಸಿಐ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಆರ್‌ಸಿಬಿ ಆಡಬೇಕಿದ್ದ ಮಹತ್ವದ ಫೈನಲ್ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸದೆ ಅಹಮದಾಬಾದ್‌ಗೆ ಸ್ಥಳಾಂತರಿಸಿರುವುದು ಕರ್ನಾಟಕದ ಯುವಕರು ಹಾಗೂ ಕ್ರೀಡಾಭಿಮಾನಿಗಳಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ಜೊತೆಗೆ ಬೆಂಗಳೂರಿಗೂ ಅನ್ಯಾಯ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಐಪಿಎಲ್‌ ಫೈನಲ್ ಪಂದ್ಯ ಅಹಮದಾಬಾದ್‌ಗೆ ಶಿಫ್ಟ್ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ‘ಐಪಿಎಲ್‌ನ ಈ ಬಾರಿಯ ಫೈನಲ್ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಬೇಕಾಗಿತ್ತು. ರಾಜಕೀಯ ಕಾರಣಗಳಿಗಾಗಿ ಈ ಹೈವೋಲ್ಟೇಜ್ ಪಂದ್ಯವನ್ನು ಗುಜರಾತ್‌ನ ಅಹಮದಾಬಾದ್‌ಗೆ ವರ್ಗಾಹಿಸಲಾಗಿದೆ. ಇದರಿಂದಾಗಿ ನಮ್ಮ ಬೆಂಗಳೂರು ಮತ್ತು ಇಡೀ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ನಿರಾಶೆಯಾಗಿದೆ. ನಮ್ಮ ಕಣ್ಣೆದುರೇ ತಮ್ಮ ನೆಚ್ಚಿನ ತಂಡ ಆಡುವುದನ್ನು ನೋಡುವ ಅವಕಾಶವನ್ನು ಕರ್ನಾಟಕದ ಯುವಕರು ಕಳೆದುಕೊಳ್ಳುವಂತಾಗಿದೆ,’ ಎಂದು ಬೇಸರ ವ್ಯಕ್ತಪಡಿಸಿದರು. ಆರ್‌ಸಿಬಿಗೆ ನಮ್ಮ ಸಂಪೂರ್ಣ ಬೆಂಬಲವಿದೆ’ ಪಂದ್ಯದ ಸ್ಥಳ ಬದಲಾವಣೆಯ ಕುರಿತು ಅಸಮಾಧಾನವಿದ್ದರೂ ಆರ್‌ಸಿಬಿ ತಂಡದ ಪ್ರದರ್ಶನವನ್ನು ಡಿ.ಕೆ.ಶಿವಕುಮಾರ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಕಳೆದ ಸೀಸನ್‌ನಲ್ಲಿಯೂ ಆರ್‌ಸಿಬಿ ಅದ್ಭುತವಾಗಿ ಆಡಿ ಗೆದ್ದಿತ್ತು. ಈ ವರ್ಷವೂ ಕೂಡ ಆಟಗಾರರು ಅದ್ಭುತ ಹೋರಾಟದ ಮೂಲಕ ಫೈನಲ್ ತಲುಪಿದ್ದಾರೆ. ಪಂದ್ಯದ ಸ್ಥಳವನ್ನು ಬದಲಾಯಿಸಿ ನಮಗೆ ಅನ್ಯಾಯ ಮಾಡಿರಬಹುದು, ಆದರೆ ನಮ್ಮ ತಂಡದ ಹೋರಾಟದ ಕಿಚ್ಚನ್ನು ಕಮ್ಮಿ ಮಾಡಲು ಸಾಧ್ಯವಿಲ್ಲ. ಒಬ್ಬ ನಾಯಕ ಯಾವಾಗಲೂ ನಾಯಕನೇ. ಆರ್‌ಸಿಬಿ ಆಟಗಾರರು ಮೈದಾನದಲ್ಲಿ ಸಿಂಹದಂತೆ ಹೋರಾಡಿದ್ದಾರೆ,’ ಎಂದು ಶ್ಲಾಘಿಸಿದರು.

‘ಕರ್ನಾಟಕ ಸರ್ಕಾರದ ಪರವಾಗಿ, ರಾಜ್ಯದ ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಪರವಾಗಿ ನಾನು ಇಡೀ ತಂಡಕ್ಕೆ ಹೃದಯಪೂರ್ವಕ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ. ಈ ಬಾರಿಯೂ ನಮ್ಮ ತಂಡಕ್ಕೆ ಜಯ ಸಿಗಲಿ ಎಂದು ಆಶಿಸುತ್ತೇನೆ,’ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version