Published
1 hour agoon
By
Akkare News
ಅಧಿಕೃತ ಪತ್ರ ಬಂದ ಬಳಿಕ ಪ್ರತ್ಯೇಕ ಸಭೆ: ಮೈಸೂರು ಕಂಬಳದ ಕುರಿತು ಇದುವರೆಗೆ ಯಾವುದೇ ಅಧಿಕೃತ ಸಂವಹನ ನಡೆದಿಲ್ಲ. ಕೇವಲ ಅನಧಿಕೃತ ಚರ್ಚೆಗಳಷ್ಟೇ ನಡೆದಿವೆ. ಅಧಿಕೃತ ಆಹ್ವಾನ ಪತ್ರ ಬಂದ ಕೂಡಲೇ ಕಂಬಳ ಸಮಿತಿಯ ಪ್ರತ್ಯೇಕ ಸಭೆಯನ್ನು ಕರೆಯಲಾಗುವುದು. ಅಲ್ಲಿ ಕರಾವಳಿಯಿಂದ ಎಷ್ಟು ಜೋಡಿ ಕೋಣಗಳನ್ನು ಕಳುಹಿಸಬೇಕು, ಯಾವ ರೀತಿ ಸಾರಿಗೆ ಹಾಗೂ ವ್ಯವಸ್ಥೆ ಮಾಡಬೇಕು ಎಂಬ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಕಂಬಳದಲ್ಲಿ ಕಟ್ಟುನಿಟ್ಟಿನ ಸಮಯಪಾಲನೆಗೆ ಕ್ರಾಂತಿಕಾರಿ ನಿರ್ಧಾರ: ಕಂಬಳ ಕೂಟಗಳು ಅತಿಯಾಗಿ ವಿಳಂಬವಾಗುವುದನ್ನು ತಡೆಗಟ್ಟಲು ಸಭೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಸೆ.16ರಿಂದ ಕಾರ್ಕಳದಲ್ಲಿ ಈಜು ತರಬೇತಿ: ಮಿಯಾರಿನಲ್ಲಿ ಇತ್ತೀಚೆಗೆ ನಡೆದ ಓಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಸುಮಾರು 180 ಮಂದಿ ಯುವ ಓಟಗಾರರಿಗೆ ಸೆಪ್ಟೆಂಬರ್ 12 ಮತ್ತು 13ರಂದು ಕಾರ್ಕಳದ ಕ್ರೀಡಾ ಇಲಾಖೆಯ ನೂತನ ಸ್ವಿಮ್ಮಿಂಗ್ ಪೂಲ್ನಲ್ಲಿ ವಿಶೇಷ ಈಜು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ದೇವಿಪ್ರಸಾದ್ ಶೆಟ್ಟಿ ಬೆಳಪು ಮಾಹಿತಿ ನೀಡಿದರು. ಸಭೆಯಲ್ಲಿ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಸಮಿತಿಯ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.