Published
2 years agoon
By
Akkare News
ಪುತ್ತೂರು: ರಾಜ್ಯಮಟ್ಟದ 17 ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ ಪುತ್ತೂರಿನಿಂದ ರಾಷ್ಟ್ರಮಟ್ಟಕ್ಕೆ 5 ಮಂದಿ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ. ಅವರು 3ಸಾವಿರ, 1500, 800 ನಲ್ಲಿ ಪ್ರಥಮ ಸ್ಥಾನ ಪಡೆದ ಕಡಬದ ಚರಿಷ್ಮಾ, 3000 ಮೀಟರ್ ವೇಗದ ನಡಿಗೆಯಲ್ಲಿ ಬೆಥನಿ ನೂಜಿ ಬಾಳ್ತಿಲದ ಚೈತನ್ಯ, 5ಸಾವಿರ ವೇಗದ ನಡಿಗೆಯಲ್ಲಿ ರಾಮಕುಂಜೇಶ್ವರ ಪ್ರೌಢ ಶಾಲೆಯ ವಿಲಾಸ್ ಗೌಡ, ಶಾರ್ಟ್ ಫುಟ್ ನಲ್ಲಿ ಪಟ್ಟೆ ಪ್ರಿತಭಾ ಪ್ರೌಢಶಾಲೆಯ ತನುಶ್ರೀ, ರಿಲೆಯಲ್ಲಿ ಮೊರಾರ್ಜಿ ದೇಸಾಯಿ ಶಾಲೆಯ ಪೃಥ್ವಿರಾಜ್ ಆರ್ ಎಸ್ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.