Published
2 years agoon
By
Akkare News
ವಿಟ್ಲ,ಜ1:ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆ ಯ ಸಂದರ್ಭ ದಿನಾಂಕ 15-01-2024 ರಂದು ಸೋಮವಾರ *ಸಮರ್ಪಣ್* ವಿಟ್ಲ ಅರ್ಪಿಸುವ ಕಲಾ ಕಾಣಿಕೆ *ಶಾಂಭವಿ* ನಾಟಕದ ಆಮಂತ್ರಣ ವನ್ನು
ಈ ದಿನ 01-01-2024 ಸೋಮವಾರ ಸಂಜೆ 6-00 ಗಂಟೆಗೆ *ಶ್ರೀ ಪಂಚಲಿಂಗೇಶ್ವರ* ದೇವರ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು .
ಈ ಸಂದರ್ಭದಲ್ಲಿ ಸಮರ್ಪಣ್ ವಿಟ್ಲ ಗೌರವಾಧ್ಯಕ್ಷ ರಾದ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಅಧ್ಯಕ್ಷರಾದ ಯಶವಂತ್ ನಿಡ್ಯ, ಉಪಾಧ್ಯಕ್ಷರಾದ ಯಾದವ ಮಡಿವಾಳಕೋಡಿ, ಸೂರಜ್ ಕೋಟ್ಯಾನ್ ,ಪ್ರಧಾನ ಕಾರ್ಯದರ್ಶಿ ರೋಹಿತ್ ಕಟ್ಟೆ, ಗೌರವ ಸಲಹೆಗಾರರಾದ ವಿಶ್ವನಾಥ ನಾಯ್ತೊಟ್ಟು, ಸಂಚಾಲಕರಾದ ಹರೀಶ್ ಕೆ .ವಿಟ್ಲ, ಸಹ ಸಂಚಾಲಕರಾದ ರಕ್ಷಿತ್ ಆರ್ ಎಸ್, ಸಂಘಟನಾ ಕಾರ್ಯದರ್ಶಿ ರವಿಶಂಕರ, ಕಾರ್ಯಕಾರಿಣಿ ಸದಸ್ಯರಾದ ದೀಪಕ್ ಕಟ್ಟೆ ,ಮನೋಜ್ ವಿಟ್ಲ ,ಧನಂಜಯ ಕಟ್ಟೆ ಹಿರಿಯರಾದ ವಿಶ್ವನಾಥ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.