ಮಂಗಳೂರು: ನಮ್ಮ ಕುಡ್ಲ ಮತ್ತು ಕಂಬಳ ಟೀಮ್ ದುಬೈ ಪಾಲೇಮಾರ್ ಗ್ರೂಪ್ ವತಿಯಿಂದ ನಡೆದ ನಮ್ಮ ಕಂಬಳ 2026 ಪ್ರಶಸ್ತಿ ಸಮಾರಂಭ ಪಾಲೇಮಾರ್ ಸಭಾಂಗಣದಲ್ಲಿ ನಡೆಯಿತು ಸಮಾರಂಭದಲ್ಲಿ ರಾಜಕೀಯ ಮುಖಂಡರು ಕಂಬಳ ಕೋಣದ ಯಜಮಾನರು ಮತ್ತು ಜಿಲ್ಲೆಯಲ್ಲಿ ನಡೆಯುವ ಕಂಬಳದ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಂಗಳೂರು ಸಂಸದ ಬ್ರಿಜೇಶ್ ಚೌಟ ಮಾತನಾಡಿ ಕಂಬಳ ತುಳು ನಾಡಿನ ಮಣ್ಣಿನ ಕ್ರೀಡೆ ಈ ಕ್ರೀಡೆಯನ್ನು ಪರಊರಿನಲ್ಲಿ ಮಾಡೋದನ್ನು ನಾವೆಲ್ಲರು ಸಹಕಾರ ನೀಡಬಾರದು, ಇದು ನಮ್ಮ ನೆಲದ ಸಂಸ್ಕೃತಿ ಇದನ್ನು ಉಳಿಸುವ ಕೆಲಸ ಮತ್ತು ಪ್ರೋತ್ಸಾಹಿಸುವ ಕೆಲಸ ತಾವೆಲ್ಲರೂ ಮಾಡಬೇಕು ಎಂದು ಸಂಘಟಗರಿಗೆ ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಕಂಬಳಭಿಮಾನಿಗಳಿಗೆ ಶುಭವನ್ನು ಕೋರಿದರು.