Published
5 months agoon
By
Akkare News
ಪುತ್ತೂರು ಸೆ.30 : ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಪೂಡಾ ಅಧ್ಯಕ್ಷರಾದ ಅಮಲ ರಾಮಚಂದ್ರ ನೇತೃತ್ವದಲ್ಲಿ ಇಂದು ಶಾಸಕರ ಕಚೇರಿಯ ಮಹಡಿಯಲ್ಲಿ ಇಂದು ನಗರ ಯೋಜನ ಪ್ರಾಧಿಕಾರ ವತಿಯಿಂದ ಅದಾಲತ್ ಯಶಸ್ವಿಯಾಗಿ ನಡೆಯಿತು. ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರಿ ವರ್ಗದವರ ಸರ್ವ ರೀತಿಯ ಪ್ರಯತ್ನದಿಂದ ಇಂದು ಪುತ್ತೂರಿನ 120 ಮತ್ತು ಕಡಬದ 31 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಶಾಸಕರಿಗೆ ಮತ್ತು ಅಧ್ಯಕ್ಷರಿಗೆ ಮತ್ತು ಸರ್ವ ಸದಸ್ಯರಿಗೆ ಅಧಿಕಾರಿ ವರ್ಗದವರಿಗೆ ಫಲಾನುಭವಿಗಳು ಅಭಿನಂದನೆ ಸಲ್ಲಿಸಿರುತ್ತಾರೆ