Published
3 months agoon
By
Akkare News
ನಾವು ಬೇಕಂತ ಕಟ್ಟಿದ್ದಲ್ಲ…! ಗೊತ್ತಿಲ್ಲದೇ ಕಟ್ಟಿದ್ದು…!: ಸಂಬಂಧಿಸಿದವರ ಸಮಜಾಯುಷಿ
ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಸುಮಾರು 70 ಲಕ್ಷ ರೂಪಾಯಿ ವೆಚ್ಚದಡಿ ಕೋಡಿಂಬಾಡಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ.
ಕಟ್ಟಡ ನಿರ್ಮಾಣ ಬಿರುಸಿನಿಂದ ನಡೆಯುತ್ತಿತ್ತು. ಗ್ರಾಮ ಪಂಚಾಯತ್ ನಿಂದ ಯಾವುದೇ ಪರವಾನಿಗೆ ಪಡೆಯದೇ, ಇಲಾಖೆಯ 9/11 ಇಲ್ಲದೆ, ಕನ್ವರ್ಷನ್ ಮಾಡದೆ ಕಟ್ಟಡ ಕಟ್ಟುತ್ತಿರುವುದು ಸಾರ್ವಜನಿಕರ ಆಕ್ಷೇಪಣೆಗೆ ಕಾರಣವಾಗಿದೆ. ಈರ್ವರು ಗ್ರಾಮಸ್ಥರು ಪಂಚಾಯತಿಗೆ ದೂರು ನೀಡಿದ್ದು ಕಟ್ಟಡ ನಿರ್ಮಿಸಲು ಪಂಚಾಯತಿಗೆ ಅರ್ಜಿ ಕೊಟ್ಟಿದ್ದಾರ?ಪರವಾನಿಗೆ ಪಡೆದುಕೊಂಡಿದ್ದಾರ ಎಂದು ಪ್ರಶ್ನಿಸಿದ್ದ ಗ್ರಾಮಸ್ಥರು ಅನುಮತಿ ಪಡೆಯದೆ ಹೇಗೆ ಕಟ್ಟೆ ಕಟ್ಟುತ್ತಿದ್ದಾರೆ ಎಂದು ಪರಿಶೀಲಿಸಬೇಕೆಂದು ಮನವಿ ಮಾಡಿದ್ದರು. ಇದೀಗ ದೂರುದಾರರು ಪುತ್ತೂರುನಗರ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ಅಧ್ಯಕ್ಷರಿಗೆ ದೂರು ನೀಡಿದ್ದಾರೆ.