Published
2 months agoon
By
Akkare News
ಶುಕ್ರವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಪುತ್ತೂರು ಉಪ್ಪಿನಂಗಡಿ ರಸ್ತೆಯ ಚತುಷ್ಫಥ ಕಾಮಗಾರಿ ಪ್ರಗತಿಯಲ್ಲಿದ್ದು ಇಲ್ಲಿ ಹಾದು ಹೋಗುವ ರೈಲ್ವೇ ಸೇತುವೆಯನ್ನು ಅಗಲ ಮಾಡಬೇಕಿದೆ. ಸೇತುವೆಯ ಅಗಲೀಕರಣಕ್ಕೆ ೮ ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಅನುದಾನವನ್ನು ಒದಗಿಸುವುದಾಗಿ ಈ ಹಿಂದೆ ಪುತ್ತೂರಿಗೆ ಭೇಟಿ ನೀಡಿದ್ದ ಸಚಿವರು ಶಾಸಕರಲ್ಲಿ ಭರವಸೆಯನ್ನು ನೀಡಿದ್ದರು. ತಕ್ಷಣ ಅನುದಾನ ಒದಗಿಸುವುದಾಗಿ ಶಾಸಕರಿಗೆ ಭರವಸೆಯನ್ನು ನೀಡಿದ್ದಾರೆ.
ಕೊಳ್ತಿಗೆ , ಕೆದಿಲ ಮತ್ತು ಒಳಮೊಗ್ರು ಗ್ರಾಮದ ಮುಳಿಯಡ್ಕದಲ್ಲಿ ಹೊಸ ಸೇತುವೆಯ ನಿರ್ಮಾಣಕ್ಕೂ ಶಾಸಕರು ಸಚಿವರಲ್ಲಿ ಬೇಡಿಕೆ ಸಲ್ಲಿಸಿದ್ದಾರೆ. ಈ ಮೂರು ಸೇತುವೆ ಅತ್ಯಗತ್ಯವಾಗಿ ಆಗಬೇಕಿದ್ದು, ಜನಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಮುಳಿಯಡ್ಕದಲ್ಲಿ ಈ ಹಿಂದೆ ನಿರ್ಮಾಣವಾದ ಸೇತುವೆ ಕಿರಿದಾಗಿದ್ದು, ಅಗಲ ಕಡಿಮೆ ಇರುವ ಕಾರಣ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದು ಈ ಮೂರು ಸೇತುವೆಗೆ ಒಟ್ಟು ೮ ಕೋಟಿ ಅನುದಾನ ಒದಗಿಸುವಂತೆ ಮನವಿ ಮಾಡಿದ್ದಾರೆ.