ಕೋಡಿಂಬಾಡಿ ಗ್ರಾಮದ ದಾರಂದಕುಕ್ಕು ಅಂಗನವಾಡಿಯಲ್ಲಿ 33 ವರ್ಷಗಳು ಸೇವೆ ಸಲ್ಲಿಸಿ, ಅನೇಕ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿ,ಜ್ಞಾನದ ದೀಪವನ್ನು ಹಚ್ಚಿದ, ಶ್ರೀಮತಿ ವೇದಾವತಿ ಯನ್ ಶೆಟ್ಟಿ ಯವರಿಗೆ ಬೀಳ್ಕೊಡುಗೆ
ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾರಂದಕುಕ್ಕು ಅಂಗನವಾಡಿ ಕೇಂದ್ರದಲ್ಲಿ 33 ವರ್ಷ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ವೇದಾವತಿ ಯನ್. ಶೆಟ್ಟಿ ಅವರಿಗೆ ಬೀಳ್ಕೊಡುಗೆ ಜು.31ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿದ್ದ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸುಮಿತ್ರ, ಕೋಡಿಂಬಾಡಿ ವಲಯದ ಮೇಲ್ವಿಚಾರಕಿ ಯಶೋದ ಮತ್ತು ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ. ರಾಮಚಂದ್ರ ರಾಮಚಂದ್ರ ಪೂಜಾರಿ ಅವರು ವೇದಾವತಿ ಅವರನ್ನು ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು.ಉಮಾವತಿ ಸ್ತ್ರೀಶಕ್ತಿ ಸಂಘದ ಕಿರು ಪರಿಚಯ ಮಾಡಿದರು. ಗೊಂಚಲಿನ ಅಧ್ಯಕ್ಷೆ ಶಾಲಿನಿ,ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರರಾದ ಸಂಧ್ಯಾ ರಾಮಚಂದ್ರ ಗೌಡ,ಅಂಗನವಾಡಿ ಕಾರ್ಯಕರ್ತೆಯರಾದ ಅರುಣ ಬೀರಿಗ, ಸುಮಲತ ಕೋಡಿಂಬಾಡಿ, ಜಯಂತಿ ಮಠಂತಬೆಟ್ಟು, ಮಲ್ಲಿಕಾ ಆಳ್ವ ಬೆಳ್ಳಿಪ್ಪಾಡಿ, ವನಿತ ಬನ್ನೂರುಕಟ್ಟೆ, ರೇವತಿ ಕೊಡಿಮರ, ಮೀನಾಕ್ಷಿ ಶಾಂತಿನಗರ, ಆಶಾ ಕಾರ್ಯಕರ್ತೆಯರಾದ ಸುಪ್ರಿತ ಮತ್ತಿತರರು ಭಾಗವಹಿಸಿದ್ದರು.ಶಾಲಿನಿ ವೇದಾವತಿ ಅವರ ಕಿರು ಪರಿಚಯ ಮಾಡಿದರು. ನೂತನವಾಗಿ ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆ ಶಾಲಿನಿ, ಅಂಗನವಾಡಿ ಸಹಾಯಕಿ ಮೇಘನ, ವೇದಾವತಿ ಶೆಟ್ಟಿಯವರ ತಾಯಿ ಗುಲಾಬಿ ಶೆಟ್ಟಿ,ಎಲ್.ಸಿ.ಪಿ.ಆರ್.ಗಳಾದ ಪ್ರಿಯ, ಭವಾನಿ,ಪೌರಕಾರ್ಮಿಕರಾದ ಸೌಮ್ಯ ಗೀತಾ ಲಕ್ಷ್ಮಿ, ಅನಿಲ ಕೋಡಿ ಎಂಟರ್ಪ್ರೈಸಸ್ ಪ್ರೈಸ್ ಮಾಲಕ ಬಶೀರ್ ಮತ್ತಿತರರು ಭಾಗವಹಿಸಿದ್ದರು.ಮಲ್ಲಿಕಾ ಆಳ್ವ ಸ್ವರಚಿತ ಕವನ ಹಾಡಿದರು. ಸುಂದರಿ ಪ್ರಾರ್ಥಿಸಿ ಮೇಘನ ಸ್ವಾಗತಿಸಿದರು. ದಿವ್ಯ ಕಾರ್ಯಕ್ರಮ ನಿರೂಪಿಸಿದರು.