Published
12 hours agoon
By
Akkare News
ಹಲವಾರು ರಂಗಮಂಟಪ ರಚನೆ, ದ್ವಾರ,ಬೋರ್ಡಿಂಗ್, ಅಲ್ಲದೆ ಹಲವಾರು ನಾಟಕ, ನೃತ್ಯ, ಪ್ರಹಸನ ಮುಂತಾದ ಕಲಾಪ್ರಕಾರಗಳಲ್ಲಿ ಕಲಾವಿದರಿಗೆ ಬಣ್ಣ ಹಚ್ಚಿರುವ ಇವರು ಪ್ರಥಮವಾಗಿ ವೈಷ್ಣವಿ ಕಲಾವಿದರು ಮಂಜೇಶ್ವರ ದ ಮೂಲಕ ನಾಟಕ ರಂಗ ಪ್ರವೇಶಿಸಿದ ಅಪ್ಪಟ ಕಲಾಮಾತೆಯ ಪುತ್ರ ಪ್ರಸಾದ್ ಕೊಯಿಲ ಅರ್ಟ್ಸ್ ತಂಡದಲ್ಲಿ ದುಡಿದು ಪ್ರಸ್ತುತ ಅಮ್ಮಾ ಕಲಾವಿದರು ತಂಡದಲ್ಲಿದ್ದಾರೆ. ಖ್ಯಾತ ಕಲಾವಿದ ಸುಂದರ್ ರೈ ಮಂದಾರ ಇವರ ಆಪ್ತ ಮೇಕಪ್ ಮ್ಯಾನ್ ಆಗಿರುವ ಇವರು ಮಂದಾರ, ಪಡೀಲ್, ಪಾಣಾಜೆ, ಬೋಳಾರ್ ಅವರಂತಹ ಹೆಸರಾಂತ ಕಲಾವಿದರಿಂದ ಶಹಬ್ಬಾಸ್ ಗಿರಿ ಪಡೆದಿದ್ದುದನ್ನು ಮೇಕಪ್ ನಾನು ಎಂದೆಂದಿಗೂ ಎಂದು ಅತ್ಯಂತ ವಿನಮ್ರತೆಯಿಂದ ಹೇಳುವ ಪ್ರಸಾದರದ್ದು ಮಾತು ಕಡಿಮೆ ಹೆಚ್ಚು ದುಡಿಮೆ ಯ ಮನೋಭಾವದವರು. ಮಾತ್ರವಲ್ಲದೆ ಒಂದೆರಡು ನಾಟಕದಲ್ಲಿ ಬಣ್ಣ ಹಚ್ಚಿ ಕಲಾವಿದರಾಗಿಯೂ ಸೈ ಎನಿಸಿದವರು. ಡಿಸೈನ್ ಕಲಾವಿದರಾಗಿ ಜಿಲ್ಲೆಯ ಹಲವು ಜಾತ್ರೆಗಳ ಹೆಸರು ಡಿಸೈನ್ ಮಾಡಿರುವುದಲ್ಲದೆ ಚಿತ್ರ ಕಲಾವಿದರಾಗಿಯೂ ಹೆಸರು ಗಳಿಸಿರುತ್ತಾರೆ.
ಪ್ರಸಾದರ ಖ್ಯಾತಿ ಇನ್ನಷ್ಟು ಉತ್ತುಂಗಕ್ಕೇರಲಿ, ಕಲಾ ಮಾತೆಯ ಆಶಿರ್ವಾದ ಸದಾ ಇರಲಿ ” ಪ್ರಸಾದ್ ಕೊಯಿಲ ರವರು ಕೇವಲ ಆರ್ಟಿಸ್ಟ್ ಮಾತ್ರ ವಲ್ಲ, ಇವರು ಕಲಾವಿದರ “ಹಾರ್ಟ್ “ಈಸ್ಟ್ (ಹೃದಯದಲ್ಲಿ ನೆನೆಸಿರುತ್ತಾರೆ)ಆಗಿರುತ್ತಾರೆ.ಪ್ರ ಸಾದರ ಖ್ಯಾತಿ ಇನ್ನಷ್ಟು ಉತ್ತುಂಗಕ್ಕೇರಲಿ, ಕಲಾ ಮಾತೆಯ ಆಶಿರ್ವಾದ ಸದಾ ಇರಲಿ.ಅಕ್ಕರೆ ನ್ಯೂಸ್ “ಇದು ವಿಸ್ವಾಸದ ದ್ವನಿ.