Published
17 hours agoon
By
Akkare News
ಪುತ್ತೂರು :ಸಹಕಾರಿ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದ ಧುರೀಣ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಮತ್ತು ಕಸ್ತೂರಿ ಕಲಾ ಎಸ್.ರೈ ಅವರ ವಿವಾಹದ 50ನೇ ವಾರ್ಷಿಕೋತ್ಸವ ಸಂಭ್ರಮ ‘ಸೀತಾ ಕಸ್ತೂರಿ ಕಲ್ಯಾಣ-50ರ ಸಂಭ್ರಮ’ ಮೇ.23ರಂದು ಸಂಜೆ 5.30ಕ್ಕೆ ಸವಣೂರಿನ ರಶ್ಮಿ ನಿವಾಸದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಜೆ 3ರಿಂದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ‘ಸಂಗೀತ ಗಾನ ಸಂಭ್ರಮ’ ಇರಲಿದೆ ಎಂದು ರಶ್ಮಿ ಎ.ಶೆಟ್ಟಿ, ಅಶ್ವಿನ್ ಎಲ್.ಶೆಟ್ಟಿ, ಪಲ್ಲವಿ ಎಂ.ರೈ, ಮಹೇಶ್ ರೈ ಸವಣೂರು, ಅಶ್ವಿತಾ ಆರ್.ರೈ, ಡಾ.ರಾಜೇಶ್ ರೈ ಸವಣೂರು, ಇಶಾನ್ ರೈ, ಅಥರ್ವ ಶೆಟ್ಟಿ ಸವಣೂರು, ಅವಿ ಶೆಟ್ಟಿ ಸವಣೂರು ತಿಳಿಸಿದ್ದು ಉಡುಗೊರೆಗಿಂತ ಪ್ರೀತಿಯೇ ಮುಖ್ಯ. ಆದ್ದರಿಂದ ಹೂ, ಹಾರ ತರುವ ಬದಲು ಪ್ರೀತಿಯ ಹಾರೈಕೆಯೊಂದಿಗೆ ಬರುವಂತೆ ಕೋರಿದ್ದಾರೆ.