Published
2 hours agoon
By
Akkare News
ಸಾಂದೀಪನಿ ವಿದ್ಯಾ ಸಂಸ್ಥೆ ಯಶಸ್ವಿ 25 ಸಂವತ್ಸರ ಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಕೌಶಲ್ಯಗಳ ಅಭಿವೃದ್ಧಿಯ ಜತೆಗೆ ವ್ಯಕ್ತಿತ್ವ ವಿಕಸನ ತರಬೇತಿ ಸರಣಿ ಕಾರ್ಯಾಗಾರ ‘ ರಜತ ಪಲ್ಲವ ‘ದ ಮೊದಲ ಕಾರ್ಯಕ್ರಮ ನಡೆಯಿತು.
ಸಂಪನಿಮ್ಮೂಲ ವ್ಯಕ್ತಿಗಳಾದ ಜೆಸಿಐ ರಾಷ್ಟ್ರೀಯ ತರಬೇತುದಾರರಾದ ಜೆಸಿ ಸುಹಾಸ್ ಮರಿಕೆ ಇವರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊದಲನೆಯ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ನಡೆಯಿತು. ಈ ತರಬೇತಿಯಲ್ಲಿ ಪ್ರಮುಖವಾಗಿ ಟೀಮ್ ವರ್ಕ್ ನ ಮಹತ್ವ, ನಿರ್ದಿಷ್ಟ ಗುರಿಯ ಅಗತ್ಯ ಮತ್ತು ಅದನ್ನು ಸಾಧಿಸುವ ಬಗ್ಗೆ ವಿವಿಧ ಚಟುವಟಿಕೆಗಳನ್ನು ಒಳಗೊಂಡಿದ್ದವು.