ರಾಷ್ಟ್ರಭಕ್ತ ನಾಗರಿಕ ವೇದಿಕೆ (ರಿ) ಇದರ ವತಿಯಿಂದ ಸೈನಿಕ ಕಲ್ಯಾಣ ನಿಧಿಯ ಮೂಲಕ ಅರ್ಹ ಒಂಭತ್ತು ಸೈನಿಕ ಕುಟುಂಬಗಳಿಗೆ 2,70,000 ರೂ. ಅನ್ನು ಆ.5ರಂದು ಪುತ್ತೂರಿನ ಸೈನಿಕ ಸಭಾ ಭವನದಲ್ಲಿ ವಿತರಿಸಲಾಗುತ್ತಿದೆ.
ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಂದೂ ಮುಖಂಡ, ರಾಷ್ಟ್ರಭಕ್ತ ನಾಗರಿಕ ವೇದಿಕೆ (ರಿ) ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ದೇಶ ಭಕ್ತ ಜನರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.